Slide
Slide
Slide
previous arrow
next arrow

ಯಲ್ಲಾಪುರದಲ್ಲಿ ಸರಣಿ ಅಪಘಾತ: 8 ಮಂದಿಗೆ ಗಾಯ

300x250 AD

ಯಲ್ಲಾಪುರ: ಎರಡು ಲಾರಿಗಳು ಹಾಗೂ ಖಾಸಗಿ ಬಸ್ ನಡುವೆ ನಡೆದ ಸರಣಿ ಅಪಘಾತದಲ್ಲಿ 8 ಜನರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಪಟ್ಟಣದ ನ್ಯೂ ಮಲಬಾರ್ ಹೋಟೆಲ್ ಎದುರು ಗುರುವಾರ ರಾತ್ರಿ ನಡೆದಿದೆ.

ಲಾರಿ ಚಾಲಕ ಹುಬ್ಬಳ್ಳಿಯ ಶಿವಾಜಿ ರಾಮಚಂದ್ರ ತಂಗಡಗಿ, ಇನ್ನೊಂದು ಲಾರಿಯ ಚಾಲಕ ಚಾಲಕ ಹಾಸನದ ಹೊಳೆನರಸಿಪುರದ ನಟೇಶ ಮೂಡಲಹಿಪ್ಪೆ, ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ಶಿವಮೊಗ್ಗದ ಅಯೂಬ್ ಖಾನ್ ಅಮೀರ್ ಜಾನ್, ಮಂಗಳೂರಿನ ಆಶಾಲತಾ ಸುಂದರ ಶೆಟ್ಟಿ, ಬೈಂದೂರನ ಲಕ್ಷ್ಮೀ ಕೃಷ್ಣ ಪೂಜಾರಿ, ಮೂಡಬಿದರೆಯ ಟೆಲ್ಮಾ ದಯಾನಂದ ಡಿಸೋಜಾ, ಮುಂಬೈನ ಜಯಲಕ್ಷ್ಮಿ ಆನಂದ ಪೂಜಾರಿ ಗಾಯಗೊಂಡವರು.

ಚಾಲಕ ಶಿವಾಜಿ ಲಾರಿಯನ್ನು ಹುಬ್ಬಳ್ಳಿ ಕಡೆಯಿಂದ ಅಂಕೋಲಾ ಕಡೆಗೆ ಚಲಾಯಿಸಿಕೊಂಡು ಬಂದು, ಪಟ್ಟಣದ ನ್ಯೂ ಮಲಬಾರ್ ಹೋಟೆಲ್ ಎದುರು ಅಂಕೋಲಾ ಕಡೆಯಿಂದ ಹುಬ್ಬಳ್ಳಿ ಕಡೆಗೆ ಬರುತ್ತಿದ್ದ ಕಂಟೇನರ್ ಗೆ ಡಿಕ್ಕಿ ಹೊಡೆದಿದ್ದಾನೆ. ನಂತರ ಕಂಟೇನರ್ ಹಿಂದಿನಿಂದ ಬರುತ್ತಿದ್ದ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ. ಘಟನೆಯಲ್ಲಿ ಮೂರು ವಾಹನಗಳು ಜಖಂಗೊಂಡಿವೆ.

300x250 AD

    ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಲಾರಿ ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This
300x250 AD
300x250 AD
300x250 AD
Back to top